ಮೌನ ಮನಸಿನ ಆಳ ಯೋಚನೆಗೆ ಶೂನ್ಯದಂತ ಭಾವ.
ಹುರುಳು ಜೀನದ ಕುರುಡು ಸತ್ಯವು ಸ್ಪಷ್ಠ ಒಂದೇ ದ್ವಂದ್ವ.
ಬರಡು ಭಾವನೆಗಳ ಮೇಲೆ ಕಣ್ಣೇರ ಹಾನಿಗಳದೆ ಚಿಲುಮೆ.
ಕವಲು ದಾರಿಯ ಸುತ್ತ ಬರಿ ಕಲ್ಪನೆಗಳದೆ ಕುಲುಮೆ.
ಸುಪ್ತ ಮನಸಿನ ಸುಳಿ ಯೊಳಗೆ ಸಿಲುಕಿನಲುಗುತಿದೆ ಆಶಾಕಿರಣ.
ದಟ್ಟ ಭರವಸೆಯ ಶಿಖರದೊಳಗೆ ಗುಪ್ತಗಾಮಿನಿಯ ಚಲನಾವಲನ.
ನಾನಾರೆಂಬುದ ತಿಳಿಯಲು ಹೋಗಿ ಸಿಲುಕಿದೆ ಇಲ್ಲದ ಗೊಂದಲದಲ್ಲಿ.
ಹೋಯಿತು ಮರೆತು ಆಡದ ಮಾತು ಬೇಡದ ಯೋಚನೆ ಗದ್ದಲದಲ್ಲಿ.
ಅರ್ಥವಾಗದ ವಿಷಯಗಳೆಲ್ಲವು, ಹೇಗೋ ಸಾಗಿದೆ ಜೀವನವು.
ನೋವು ನಲಿವುಗಳ ಸಾಗರವು.
ಹುರುಳು ಜೀನದ ಕುರುಡು ಸತ್ಯವು ಸ್ಪಷ್ಠ ಒಂದೇ ದ್ವಂದ್ವ.
ಬರಡು ಭಾವನೆಗಳ ಮೇಲೆ ಕಣ್ಣೇರ ಹಾನಿಗಳದೆ ಚಿಲುಮೆ.
ಕವಲು ದಾರಿಯ ಸುತ್ತ ಬರಿ ಕಲ್ಪನೆಗಳದೆ ಕುಲುಮೆ.
ಸುಪ್ತ ಮನಸಿನ ಸುಳಿ ಯೊಳಗೆ ಸಿಲುಕಿನಲುಗುತಿದೆ ಆಶಾಕಿರಣ.
ದಟ್ಟ ಭರವಸೆಯ ಶಿಖರದೊಳಗೆ ಗುಪ್ತಗಾಮಿನಿಯ ಚಲನಾವಲನ.
ನಾನಾರೆಂಬುದ ತಿಳಿಯಲು ಹೋಗಿ ಸಿಲುಕಿದೆ ಇಲ್ಲದ ಗೊಂದಲದಲ್ಲಿ.
ಹೋಯಿತು ಮರೆತು ಆಡದ ಮಾತು ಬೇಡದ ಯೋಚನೆ ಗದ್ದಲದಲ್ಲಿ.
ಅರ್ಥವಾಗದ ವಿಷಯಗಳೆಲ್ಲವು, ಹೇಗೋ ಸಾಗಿದೆ ಜೀವನವು.
ನೋವು ನಲಿವುಗಳ ಸಾಗರವು.
No comments:
Post a Comment